
ಮೈಸೂರು ಅಭಿವೃದ್ಧಿ ಪ್ರಾಧಿಕಾರವು ನಮಗೆ ನೀಡಿದ ವಿಶಾಲವಾದ 
ನಿವೇಶನದಲ್ಲಿ ನಮ್ಮ ಭಾರತೀಯ ಸಂಸೃತಿಯ ಹಿನ್ನೆಲೆಯಲ್ಲಿ 
ಒಂದು ವಿದ್ಯಾಲಯವನ್ನು ಸ್ಥಾಪಿಸುವ ಕಲ್ಪನೆಯು ನಮ್ಮಲ್ಲಿ 
ಒಡಮೂಡಿತು. ಅನೇಕ ದಾನಿಗಳು ಹಾಗೂ ಕಾರ್ಯಕರ್ತರ 
ಸಹಕಾರದಿಂದ ಈ ಕಲ್ಪನೆಯು ಸಾಕಾರಗೊಳ್ಳಲು ಸಾಧ್ಯವಾಯಿತು.
  
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯಬೇಕು 
ಜೊತೆಗೆ ನಮ್ಮ ಸಂಸ್ಕೃತಿಯ ಪರಿಕಲ್ಪನೆಯೂ ಅವರಲ್ಲಿ 
ಮೂಡಿಬರಬೇಕೆಂಬುದೇ ನಮ್ಮ ಆಕಾಂಕ್ಷೆಯಾಗಿತ್ತು. 
ಅದರಂತೆ ಶಿಕ್ಷಕರ ಮತ್ತು ಸಂಸ್ಥೆಯ ಆಡಳಿತವರ್ಗದ 
ವಿಶೇಷಪ್ರಯತ್ನದಿಂದ ಈ ಸಂಸ್ಥೆಯು ಶೈಕ್ಷಣಿಕ ಪ್ರಗತಿಯಲ್ಲಿ ಉತ್ತಮ 
ಸಾಧನೆಯನ್ನು ಮಾಡಿ ಆದರ್ಶವಿದ್ಯಾಸಂಸ್ಥೆಯಾಗಿ ಬೆಳಗುತ್ತಿರುವುದು 
ನಮಗೆ ಸಂತಸವನ್ನುಂಟುಮಾಡಿದೆ. ಜನತೆಯ ಸಹಕಾರದಿಂದ ಮತ್ತು 
ಶಿಕ್ಷಕರ ಹಾಗೂ ಕಾರ್ಯಕರ್ತರ ಸಾಧನೆಯಿಂದ ಈ ಸಂಸ್ಥೆಯು ಇದೇ 
ಮಟ್ಟವನ್ನು ಉಳಿಸಿಕೊಂಡು ಬೆಳೆಯುತ್ತಿರಲೆಂದು ನಾವು ಹಾರೈಸುತ್ತೇವೆ.  
 
    
     
ಇತಿ ಸಪ್ರೇಮನಾರಾಯಣಸ್ಮರಣೆಗಳು,
